Saturday, 10th May 2025

BBK 11: ನಾಮಿನೇಷನ್ ವೇಳೆ ಬಿಗ್ ಬಾಸ್​ನ ಬಿಗ್ ಕಂಟೆಸ್ಟೆಂಟ್ ತ್ರಿವಿಕ್ರಮ್-ಮಂಜು ನಡುವೆ ಗಲಾಟೆ

Manju and Trivikram

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಫಿನಾಲೆಗೆ ಹತ್ತಿರವಾಗುತ್ತಿದೆ. ಸದ್ಯ ಮನೆಯಲ್ಲಿ 10 ಮಂದಿಯಷ್ಟೆ ಉಳಿದುಕೊಂಡಿದ್ದಾರೆ. ಇವರ ಪೈಕಿ ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಯಾಕೆಂದರೆ ಮನೆಯೊಳಗಿರುವ ಸ್ಪರ್ಧಿಗಳೆಲ್ಲರೂ ಅದ್ಭತವಾಗು ಆಡುತ್ತಿದ್ದಾರೆ. ಸದ್ಯ ದೊಡ್ಮನೆಯ ರೆಸಾರ್ಟ್ ಆಗಿ ಪರಿವರ್ತನೆಯಾಗಿದ್ದು, ಟಾಸ್ಕ್​ಗಳು ನಡೆಯುತ್ತಿವೆ. ಇದಾದ ಬಳಿಕ ಇಂದು ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ.

ನಾಮಿನೇಷನ್ ಪ್ರಕ್ರಿಯೆ ವೇಳೆ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವೆ ದೊಡ್ಡ ಜಗಳ ನಡೆದಿದೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದ್ದಾರೆ. ಅದೇನೆಂದರೆ, ನಾಮಿನೇಟ್ ಆಗೋ ಸ್ಪರ್ಧಿಗೆ ಕೃತಕವಾಗಿ ತಯಾರಿಸಿರುವ ಬಾಟಲಿಗಳಿಂದ ಹೊಡೆದು ನಾಮಿನೇಟ್ ಮಾಡಬೇಕಿದೆ. ಮೊದಲು ನಾಮಿನೇಟ್ ಮಾಡಬೇಕು. ಸೂಕ್ತ ಕಾರಣ ಕೊಡಬೇಕು. ಆ ಮೇಲೆ ಬಾಟಲಿಯಿಂದ ತಲೆಗೆ ಹೊಡೆಯಬೇಕು. ಇದು ಈ ವಾರದ ನಾಮಿನೇಷನ್ ಪ್ರಕ್ರಿಯೆ ಆಗಿದೆ.

ಹಾಗೆ ಉಗ್ರಂ ಮಂಜು ತ್ರಿವಿಕ್ರಮ್​ನನ್ನೂ ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಜೋರು ಮಾತುಕತೆ ನಡೆದಿದೆ. ಇಬ್ಬರ ನಡುವೆ ಕ್ಯಾರೆಕ್ಟರ್‌ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಕ್ಯಾಪ್ಟನ್ಸಿ ಓಟದಲ್ಲಿ ಸರಿಯಾದ ರೀಸನ್ ಕೊಡದೇ ಅದರಿಂದ ಆಚೆ ಹಾಕಿದ್ರಿ ಎಂದು ಮಂಜು ಹೇಳಿದ್ದಾರೆ. ಆಗ ರಾಜನ ಟಾಸ್ಕ್​ನಲ್ಲಿ ಕುಳಿತುಕೊಂಡು ಮಾತಾಡೋಣ ಅಂತ ಹೇಳಿದ್ರು ಗಲಾಟೆ ಮಾಡಿಕೊಂಡ್ರಿ ಅಂತ ತ್ರಿವಿಕ್ರಮ್​ ತಿರುಗೇಟು ಕೊಟ್ಟಿದ್ದಾರೆ. ಇದೇ ವಿಚಾರದ ಮಧ್ಯೆ ತ್ರಿವಿಕ್ರಮ್​ ಮಂಜುಗೆ ಗೊತ್ತಿದೆ ನಿಮ್ಮ ಕ್ಯಾರೆಕ್ಟರ್ ಏನ್ ಅಂತ ನಮಗೂ ಗೊತ್ತು ಸ್ವಾಮಿ ಎಂದು ಹೇಳಿದ್ದಾರೆ.

ಅತ್ತ ಮೋಕ್ಷಿತಾ ಪೈ ಬಾಟಲಿಯಿಂದ ಹೊಡೆದಿದ್ದಾರೆ. ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಆಗ ಇಬ್ಬರ ಮಧ್ಯೆ ಟಾಕ್ ಫೈಟ್ ನಡೆದಿದೆ. ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್​​ಗೆ ಬರ್ತೀನಿ ಎಂದು ಮಂಜು ಹೇಳಿದ್ದಾರೆ. ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಕೇಳಿದ್ದಾರೆ. ಮಂಜು ಮಾತಿನಿಂದ ಕೆರಳಿದ ಮೋಕ್ಷಿ, ಅಂದರೆ ನೀವು ಮನೆಯಲ್ಲಿ ಕಾಣಿಸಿಕೊಳ್ಳೋದು ಒಬ್ಬರಿಗೆ ತೆಗೆದುಕೊಂಡು ಹೋಗಿ ಇಬ್ಬರಿಗೆ ಕೊಟ್ಟಾಗಲೇ ಅಂತಾನಾ? ನೀವು ಯಾರು ನನಗೆ ವೈಸ್​ ರೈಸ್ ಮಾಡೋಕೆ ಎಂದು ರೊಚ್ಚಿಗೆದ್ದಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ನಾನು ನಾಮಿನೇಟ್ ಆಗಲ್ಲ ಎಂದ ಮಂಜುಗೆ, ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ ಎಂದು ಹೇಳಿದ್ದಾರೆ.

BBK 11: ನೀನ್​ ಏನುಕ್ಕಮ್ಮಾ ಇದಿಯಾ ಬಿಗ್​ ಬಾಸ್​​ನಲ್ಲಿ: ಚೈತ್ರಾ ತಲೆಗೆ ಬಾಟಲಿಯಿಂದ ಹೊಡೆದ ರಜತ್