ರಾಮನಗರ: ನಾನು ಶಪಥ ಮಾಡ್ತೇನೆ. ರಾಮನಗರದಿಂದ ಜೆಡಿಎಸ್ ಖಾಲಿ ಮಾಡಿಸಿದ್ದೇನೆ ಅಂದವರಿಗೆ ಉತ್ತರ ಕೊಡ್ತೇನೆ. ಮುಂದಿನ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನವನ್ನು ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲುತ್ತೆ. ನಮ್ಮನ್ನ ಅಷ್ಟು ಸುಲಭವಾಗಿ ಜಿಲ್ಲೆಯಿಂದ ಖಾಲಿ ಮಾಡಿಸಲು ಸಾಧ್ಯವಿಲ್ಲ. ನನ್ನ, ನಿಖಿಲ್ ರಾಜಕೀಯ ಇಲ್ಲಿಂದಲೇ ಆರಂಭ, ಇಲ್ಲಿಯೇ ಅಂತ್ಯ. ಮುಂದಿನ ಚುನಾವಣೆಯಲ್ಲಿ ಇದೇ ಚನ್ನಪಟ್ಟಣದಲ್ಲಿ 25 ಸಾವಿರ ಲೀಡ್ ಬರುತ್ತೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಶಪಥ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಅಹಿಂದ ಸಮಾವೇಶ ವಿಚಾರಕ್ಕೆ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡ್ತಾರೆ. 17 ತಿಂಗಳಿನಿಂದ ಆ ಸಮುದಾಯಕ್ಕೆ ಕೊಟ್ಟ ಕೊಡುಗೆ ಏನು? ಅವರ ಸ್ವಾಭಿಮಾನ ಉಳಿಸುವ ಕೆಲಸ ಮಾಡಿದ್ದೀರಾ? ಅವರ ಹಣವನ್ನ ಲೂಟಿ ಮಾಡಿರೋದೇ ಕೊಡುಗೆಯಾ? ಎಂದು ಕಿಡಿಕಾರಿದ ಸಚಿವರು, ವಾಲ್ಮೀಕಿ ನಿಗಮದ ಹಣ ದೋಚಿದ್ದು ಯಾರು? ಈಗ ಬೋವಿ ಜನಾಂಗದ ಹಣ ಲೂಟಿ ಮಾಡ್ತಿಲ್ವಾ? ನಿನ್ನೆ ಮಂಡ್ಯದಲ್ಲಿ ಅಬಕಾರಿ ಲಂಚಾವತಾರ ನೋಡಿಲ್ವಾ? 20 ಲಕ್ಷ 40 ಲಕ್ಷ ಲಂಚ ಕೊಡಿ ಅಂತಿಲ್ವಾ? ಇದು ನಿಮ್ಮ ಸ್ವಾಭಿಮಾನವೇ, ಇದನ್ನೇ ಹಾಸನದಲ್ಲಿ ಮಾಡ್ತಿದ್ದೀರಾ? ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದೀರಿ, ಆ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ? ಇದನ್ನ ಭಾಷಣದಲ್ಲಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸುದ್ದಿಯನ್ನೂ ಓದಿ | Pralhad Joshi: ಸಮಾಜವಾದಿ ಪಕ್ಷದಿಂದ ಕೋಮುವಾದಿ ರಾಜಕಾರಣ; ಪ್ರಲ್ಹಾದ್ ಜೋಶಿ ಆರೋಪ
ಓಲೈಕೆ ರಾಜಕಾರಣ ಬಿಡಲಿ ಅಂತ ಸ್ವಾಮೀಜಿ ಹೇಳಿದ್ದಾರೆ ಅಷ್ಟೇ
ಒಕ್ಕಲಿಗ ಸ್ವಾಮೀಜಿಗೆ ನೋಟಿಸ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗೆ ನೋಟಿಸ್ ಕೊಟ್ಟಿರುವವರು ನನ್ನ ಮೇಲೆ ವರ್ಣನಿಂದನೆ ಮಾಡಿದ್ರಲ್ಲ ಅವರ ಮೇಲೆ ಏನು ಕ್ರಮ ಕೈಗೊಂಡಿರಿ? ಒಂದು ಕೇಸ್ ಆಗಿಲ್ಲ, ಯಾಕೆ ನೋಟಿಸ್ ಕೊಟ್ಟಿಲ್ಲ? ರಾಜ್ಯದಲ್ಲಿ ಹರಾಜಕತೆ ಪ್ರಾರಂಭ ಆಗುತ್ತೆ ಕಾದು ನೋಡಿ. ಕಾಂಗ್ರೆಸ್ನವರ ಓಲೈಕೆ ರಾಜಕೀಯ ಏನಾಗ್ತಿದೆ ಗೊತ್ತು, ಓಲೈಕೆ ರಾಜಕಾರಣ ಬಿಡಲಿ ಅಂತ ಸ್ವಾಮೀಜಿ ಹೇಳಿದ್ದಾರೆ ಅಷ್ಟೇ ಎಂದು ಅವರು ತಿಳಿಸಿದರು.
ಇವಿಎಂ ಮೇಲೆ ಕಾಂಗ್ರೆಸ್ ಅನುಮಾನ ವಿಚಾರದ ಕುರಿತು ಮಾತನಾಡಿದ ಸಚಿವರು, ಓಟಿಂಗ್ ಮಿಷನ್ ಇಂಪ್ಲಿಮೆಂಟ್ ಮಾಡಿದ್ದು ಯಾರು? ಇದೇ ಕಾಂಗ್ರೆಸ್ ಸರ್ಕಾರ ತಾನೆ. ಇವಿಎಂ ಹ್ಯಾಕ್ ಕರ್ನಾಟಕದಲ್ಲಿ ಮಾಡಿದ್ದಾರಾ. ಅದಕ್ಕೆ ಅದರ ಮೇಲೆ ಆರೋಪ ಮಾಡಿದ್ದಾರಾ? ಎಂದು ಕಾಂಗ್ರೆಸ್ ನಾಯಕರಿಗೆ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಉತ್ತರ ಕೊಡ್ತೀವಿ
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಉತ್ತರ ಕೊಡುತ್ತೇವೆ. ಕಾರ್ಯಕರ್ತರ ಭಾವನೆ ನಿಖಿಲ್ ಚನ್ನಪಟ್ಟಣ ಇರಲಿ ಅಂತಿದೆ. ಆದರೆ ನಿಖಿಲ್ ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ಈಗ ಪಕ್ಷದ ಸಂಘಟನೆಯ ಜವಾಬ್ದಾರಿ ನಿಖಿಲ್ ಮೇಲಿದೆ ಎಂದರು.
ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಮೊನ್ನೆ ಅಚ್ಚುಕಟ್ಟಾಗಿ ಚುನಾವಣೆ ಮಾಡಿದ್ದಾರೆ. ಮುಂದೆ ಈ ಪಕ್ಷ ಅಧಿಕಾರಕ್ಕೆ ತರಲು ಅವರಿಗೆ ವಿಶ್ವಾಸ ಮೂಡಿದೆ. ನಿಖಿಲ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡ್ತೇವೆ. ಮುಂದಿನ ಸಂಕ್ರಾಂತಿಯಿಂದ ಪಕ್ಷ ಸಂಘಟನೆ ಕಾರ್ಯಕ್ರಮ ಆರಂಭಿಸುತ್ತೇವೆ ಎಂದರು.
ಮಂಡ್ಯ ಲೋಕಸಭೆಗೆ ನಿಖಿಲ್ರನ್ನು ನಿಲ್ಲಿಸಬೇಕು ಅಂತ ಸಾ ರಾ ಮಹೇಶ್ ಸಾವಿರ ಸಲ ಹೇಳಿದ್ರು ಆದರೆ ನಿಖಿಲ್ ಕುಮಾರಸ್ವಾಮಿ ನಾನು ಮಂಡ್ಯ ಬರೊದು ಸೂಕ್ತ ಅಲ್ಲ ಅಂತ ನಿಖಿಲ್ ಕಠಿಣ ನಿರ್ಧಾರ ಮಾಡಿದ್ರು. ನಿಖಿಲ್ ಅಧಿಕಾರಕ್ಕೆ ಹಪಹಪಿಸಿದ್ರೆ ಆಗಲೇ ಮಂಡ್ಯದಿಂದ ಚುನಾವಣೆಗೆ ನಿಲ್ಲಬಹುದಿತ್ತು ಎಂದು ತಿಳಿಸಿದರು.
ಇವತ್ತು ದೇವೇಗೌಡರ ಕುಟುಂಬ ಉಳಿದಿದ್ರೆ ಒಂದು ಕಡೆ ಬೆಳೆಸಿದ ಅಭಿಮಾನಿಗಳು, ಇನ್ನೊಂದು ದೇವರ ಅನುಗ್ರಹ ಇರೋದ್ರಿಂದ ಬದುಕಿದ್ದೇವೆ. ನಮ್ಮನ್ನು ಅವರು ಟೂರಿಂಗ್ ಟಾಕೀಸ್ ಅಂತಾರೆ ಇವತ್ತು ಯಾವುದಾದರೂ ಎರಡು ಜಿಲ್ಲೆಯಲ್ಲಿ ನಿಂತು ಗೆಲ್ಲುವ ತಾಕತ್ತು ಇರೋದು ಜೆಡಿಎಸ್ ಮಾತ್ರ. ಈ ಚುನಾವಣೆಗೆ ನಿಖಿಲ್ ನಿಲ್ಲಿಸಬೇಕು ಅಂತ ಇರಲಿಲ್ಲ. ಒಂದು ವೇಳೆ ಇಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ಲಿಸಲೇ ಬೇಕಿದ್ದರೆ ಲೋಕಸಭೆ ಚುನಾವಣಾ ಬಳಿಕವೇ ವೇದಿಕೆ ನಿರ್ಮಾಣ ಮಾಡ್ತಿದ್ದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಿಗೆ ಭಯ ಕಾಡ್ತಿದೆ
ಕಾಂಗ್ರೆಸ್ ಅಭ್ಯರ್ಥಿ ಏನೇನು ನಾಟಕ ಆಡ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಕನಸ್ಸಲ್ಲು ಭಯ ಇದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Karnataka Rain: ಸೈಕ್ಲೋನ್ ಎಫೆಕ್ಟ್; ನಾಳೆ ಬೆಂಗಳೂರು, ಮಂಡ್ಯ, ಮೈಸೂರು ಸೇರಿ ಹಲವೆಡೆ ಜೋರು ಮಳೆ ನಿರೀಕ್ಷೆ
ರಾಜ್ಯದಲ್ಲಿ ಅರೋಗ್ಯ ವ್ಯವಸ್ಥೆ ಹದಗೆಟ್ಟಿದೆ
ಕೆ. ಸಿ ಜನರಲ್ ಆಸ್ಪತ್ರೆಗೆ ಲೋಕಾಯುಕ್ತ, ಉಪ ಲೋಕಾಯುಕ್ತ ಹೋಗಿದ್ರು, ಇದೇನೋ ಆಸ್ಪತ್ರೆ ನೋ, ಭೂತಬಂಗಲೆನೋ ಅಂತ ಸ್ವತಃ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಅರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಉದಾಹರಣೆ. ಸಚಿವರಿಗೆ ಮಾನ ಮರ್ಯಾದೆ ಇದ್ಯಾ? ಎಂದು ಕಿಡಿಕಾರಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಯಾವುದೇ ಮೆಡಿಸಿನ್ ಕೊಟ್ಟು ಬಳ್ಳಾರಿಯಲ್ಲಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಸರ್ಕಾರದ ಯಾರಾದ್ರೂ ಪ್ರತಿನಿಧಿ ಹೋಗಿದ್ದೀರಾ? ನಿಮಗೆ ನಾಚಿಕೆ ಆಗಲ್ವಾ? ನಮ್ಮ ಬಗ್ಗೆ ಮಾತನಾಡೊದಕ್ಕೆ, ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡ್ತೀರಾ ಎಂದು ಅರೋಗ್ಯ ಸಚಿವರಿಗೆ ತರಾಟೆಗೆ ತೆಗೆದುಕೊಂಡರು.