Monday, 12th May 2025

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೊರೊನಾ ಸೋಂಕು ದೃಢ

ಮುಂಬೈ: ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಈ ಕಾರಣದಿಂದ ಬಾಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷ (ಅಠವಳೆ ಬಣ)ದ ಪಿಆರ್ಓ ಆಗಿರುವ ಮಯೂರ್ ಬಾರ್ಕರ್ ಮಾಹಿತಿ ನೀಡಿದ್ದು,  ಅಠವಳೆ ಅವರ ಕೋವಿಡ್ ವರದಿ ಇಂದು ಬಂದಿದ್ದು, ಪಾಸಿಟಿವ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸಚಿವ ಅಠವಳೆಯವರು ” ಗೋ ಕೊರೊನಾ ಗೋ” ಎಂದು ಹೇಳಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.

ಚಲನಚಿತ್ರ ನಿರ್ಮಾಪಕ ಅನುರಾಗ್‌ ಕಶ್ಯಪ್‌ ವಿರುದ್ಧ ಅತ್ಯಾಚಾರದ ಆರೋಪ ಹೊರೆಸಿರುವ ನಟಿ ಪಾಯಲ್‌ ಘೋಷ್‌ ಸೋಮವಾರ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾಗೆ (ಅಠವಳೆ ಬಣ) ಸೇರ್ಪಡೆಗೊಂಡಿದ್ದರು. ನಟಿ ಪಾಯಲ್ ಘೋಷ್ ಅವರು ರಾಮದಾಸ್ ಅಠವಳೆಯವರ ಸಮ್ಮುಖದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಅಠವಳೆಯವರಿಗೆ ಸೋಂಕು ದೃಢವಾಗಿದ್ದು, ಪಾಯಲ್ ಘೋಷ್’ಗೂ ಸಂಕಷ್ಟ ಎದುರಾಗಿದೆ.

Leave a Reply

Your email address will not be published. Required fields are marked *