Wednesday, 14th May 2025

ನಿರರ್ಥಕ ಬಜೆಟ್: ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ

ಕೊಲ್ಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಿರಾಶಾದಾಯಕ ಹಾಗೂ ನಿರರ್ಥಕವಾಗಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ ನಲ್ಲಿ ಅಭಿವೃದ್ಧಿ, ದೂರದೃಷ್ಟಿ ಅಂಶಗಳು ಇಲ್ಲವಾಗಿವೆ. ಕೃಷ್ಣ ಕೊಳ್ಳದ ಸಮಸ್ಯೆಗಳಿಗೆ ಹಾಗೂ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ರೈತಾಪಿ ವರ್ಗದ ಹಿತವನ್ನು ಕಡೆಗಣಿಸಲಾಗಿದೆ. ರಾಜ್ಯದ ಜನತೆಗೆ ಈ ಬಜೆಟ್ ನಿರಾಸೆಯನ್ನುಂಟು ಮಾಡಿದೆ. ಒಟ್ಟಾರೆ ಇದು ನಿರರ್ಥಕ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *