Monday, 12th May 2025

ಕೇಂದ್ರ ಸಚಿವ ಪಾಸ್ವಾನ್ ನಿಧನಕ್ಕೆ ಗಣ್ಯರ ಕಂಬನಿ

ನವದೆಹಲಿ : ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿ ದ್ದಾರೆ. ಪಾಸ್ವಾನ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿ, ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ನಿಧನದಿಂದ ದೇಶಕ್ಕೆ ತುಂಬಲಾ ರದ ನಷ್ಟವಾಗಿದೆ. ಅವರ ನಿಧನದಿಂದ ರಾಷ್ಟ್ರವು ದೂರದೃಷ್ಟಿಯ ನಾಯಕನನ್ನು ಕಳೆದುಕೊಂಡಿದೆ. ಅವರು ಸಂಸತ್ತಿನ ಅತ್ಯಂತ ಸಕ್ರಿಯ ಹಾಗೂ ದೀರ್ಘಕಾಲ ಸೇವೆ ಸಲ್ಲಿಸಿದ ಸದಸ್ಯರಲ್ಲಿ ಒಬ್ಬರಾಗಿದ್ದರು ಎಂದಿದ್ದಾರೆ.

ಕೇಂದ್ರ ಸಚಿವ ಪ್ರಕಾಶ್ ಜಾವೇಡೇಕರ್ ಟ್ವೀಟ್ಮಾ, ರಾಮ್ ವಿಲಾಸ್ ಪಾಸ್ವಾನ್ ಅವರು ದಲಿತರಿಗಾಗಿ ಅವರ ಜೀವನ ಪರ್ಯಂತ ಹೋರಾಟ ನಡೆಸಿದರು. ಅವರು ಕ್ಯಾಬಿನೆಟ್ ನಲ್ಲೂ ಕ್ರಿಯಶೀಲರಾಗಿದ್ದರು ಎಂದಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್ ಮಾಡಿ ‘ ರಾಮ್ ವಿಲಾಸ್ ನಿಧನದ ಮೂಲಕ ಬಡ ದಲಿತರು ಇಂದು ಬಲವಾದ ರಾಜಕೀಯ ಧ್ವನಿ ಯನ್ನು ಕಳೆದುಕೊಂಡರು ಎಂದಿದ್ದಾರೆ.

Leave a Reply

Your email address will not be published. Required fields are marked *